Jan 12, 2012

ವಿವೇಕ ಚೂಡಾಮಣಿ-ಭಾಗ-೧೮


ನಲ್ಮೆಯ ಗೆಳೆಯ/ತಿಯರಿಗೆಲ್ಲಾ ಸಂಕ್ರಾತಿಯ ಶುಭಾಶಯಗಳು.

ಬ್ಲಾಗೋದುಗರ ಬೆಂಬಲದಿಂದ ಶಂಭುಲಿಂಗನ ಪುರಾಣಕ್ಕೆ ಎರಡು ವರುಷ ತುಂಬಿ ಮೂರನೆಯದು ಸಾಗುತ್ತಿದೆ.  ಸಾಗುತ್ತಲೇ ಇದ್ದರೆ ಚೆನ್ನ ಎನ್ನುವುದು ನನ್ನ ಅನಿಸಿಕೆ. ಶಿಖರದ ತುತ್ತತುದಿಯನ್ನು ತಲುಪಿ ಬಿಟ್ಟರೆ ಮುಂದೇನು ಎನ್ನುವ ಸಮಸ್ಯೆ ಮೊದಲಾಗುತ್ತದೆ. ನಂತರ ಅಲ್ಲಿಂದ ಕೆಳಮುಖವಾಗಿ ಇಳಿಯಲೇ ಬೇಕು !. ಅಧೋಗತಿಗಿಂತಲೂ ಏರುಗತಿಯೇ ಸೊಗಸು ಅಲ್ಲವೆ  ?! :).  ’ಕೊನೆಯನೆಂದು ಮುಟ್ಟದಿರು’ ಎನ್ನುವ ಕವಿವಾಣಿಯಂತೆ ಜೀವನದ ಪ್ರತಿಯೊಂದು ಕ್ಷಣವನ್ನು ’ಈಗಿನದೇ’ ಎನ್ನುವಷ್ಟು ಹೊಸತರಂತೆ ಅನುಭವಿಸೋಣ. ’ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ(ಜೀವನ)’ ಎಂದು ವರಕವಿಯ ವಾಣಿಯು ನಮ್ಮ ಬೆನ್ನು ತಟ್ಟುತ್ತಿರುತ್ತದೆ. ಈ ವರುಷದಲ್ಲಿ ಎಲ್ಲಾ ಸದಭಿರುಚಿಯ ಬ್ಲಾಗುಗಳೂ Update ಆಗಲಿ ಎಂದು ಹಾರೈಸೋಣ.  ಇದರೊಟ್ಟಿಗೆ ವಿವೇಕ ಚೂಡಾಮಣಿಯ ಮುಂದಿನ ಕಂತನ್ನು ಸೇರಿಸಿದ್ದೇನೆ.  ಮತ್ತೊಮ್ಮೆ ಎಲ್ಲರಿಗೂ ಧನ್ಯವಾದಗಳು.

ವಿವೇಕ ಚೂಡಾಮಣಿ-ಭಾಗ-೧೮
 

7 comments:

sunaath said...

ಪ್ರಿಯ ಸುಬ್ರಹ್ಮಣ್ಯರೆ,
ನಿಮಗೂ ಸಹ ಸಂಕ್ರಾಂತಿಯ ಶುಭಾಶಯಗಳು.
ಉತ್ತರಾಯಣವು ನಿಮಗೆ ಮಂಗಲವನ್ನು ತರಲಿ.

Subrahmanya said...

ಕಾಕಾ,

ನನ್ನೊಂದಿಗೆ ನೀವೂ ಎಚ್ಚರವಾಗಿರುವುದು ಕಂಡು ಸಂತಸವಾಯಿತು :). ನಿಮಗೂ ಶುಭಾಶಯಗಳು.

hamsanandi said...

ಸಾಗುತ್ತಲೇ ಇರುವುದೇ ಚೆನ್ನ! ಸರಿಯಾದ ಮಾತು :)

ಸಂಕ್ರಾಂತಿಯ ಹಾರೈಕೆಗಳು ನಿಮಗೆಲ್ಲರಿಗೂ.

ಬಾಲು said...

ನಿಮಗೂ ಸಂಕ್ರಾಂತಿಯ ಶುಭ ಹಾರೈಕೆಗಳು. (ಎಳ್ಳು ಬೆಲ್ಲ ಕೊಟ್ಟರೆ, ಇನ್ನೂ ಸ್ವಲ್ಪ ಜಾಸ್ತಿ ಹಾರೈಕೆ. )
ಬರವಣಿಗೆ ಹೀಗೆ ಸಾಗುತ್ತ ಇರಲಿ. ಅದರೊಂದಿಗೆ ಎಲ್ಲರ ಜ್ಞಾನ ವೃದ್ದಿಯೂ..

ಚುಕ್ಕಿಚಿತ್ತಾರ said...

ನಿಮಗೂ ಸಹ ಸಂಕ್ರಾಂತಿಯ ಶುಭಾಶಯಗಳು.

ಮನಮುಕ್ತಾ said...

ಶುಭಾಶಯಗಳು..:)
ಬರಹಗಳು ಬರುತ್ತಿರಲಿ...

shivu.k said...

ಸುಬ್ರಮಣ್ಯ ಸರ್,
ನಿಮ್ಮ ಬ್ಲಾಗ್ ಮೂರನೆ ವರ್ಷಕ್ಕೆ ಕಾಲಿಟ್ಟಿರುವುದಕ್ಕೆ ಅಭಿನಂದನೆಗಳು. ನಿಮ್ಮ ವಿವೇಕ ಚೂಡಮಣಿ ಸರಣಿ ನಿಜಕ್ಕೂ ತುಂಬಾ ಚೆನ್ನಾಗಿದೆ...ಮುಂದುವರಿಸಿ.