Jan 26, 2010

" ಗುಂಡ್ಯ ಗಮ್ಮತ್ತು...... "

  " ಗುಂಡಿನ ಮತ್ತೇ ಗಮ್ಮತ್ತು " ಅಂತ  ಕೇಳೀದೀವಿ...ಇದ್ಯಾವುದು "ಗುಂಡ್ಯ ಗಮ್ಮತ್ತು " ಅಂತೀರಾ
 ...ಹಾಗಾದ್ರೆ ಮುಂದೆ ಓದಿ....




ಪಶ್ಚಿಮ ಘಟ್ಟದ ಬಿಸಿಲೆ ಅರಣ್ಯದಲ್ಲಿ ಹರಿಯುವ ಆ ಸುಂದರ ನದಿಯನ್ನು ನೋಡುತ್ತಿದ್ದ  ನನಗೆ ( i mean ಶಂಭುಲಿಂಗ !) ಅಚಾನಕ್ ಆಗಿ ಘನ ಸರ್ಕಾರದ ’ ಶಾಕ್ ’ ಮಂತ್ರಿಗಳ ದರ್ಶನವಾಯಿತು. 

ಇಂತಹ ಅವಕಾಶವನ್ನು ನಾನು ಬಿಡಲಿಲ್ಲ...ಮಾತಿಗೆಳೆದೇ ಬಿಟ್ಟೆ ’ಶಾಖಾ’ನುಭಾವರನ್ನು....


" ..ಈ ಗುಂಡ್ಯ ಜಲವಿದ್ಯುತ್ ಯೋಜನೆಯೇ ಬೇಕಾ ಸಾರ್ ನಿಮಗೆ ..? ಬೇರೆಲ್ಲೂ ಉತ್ಪಾದನೆ ಮಾಡೋಕಾಗಲ್ವೆ...ನೋಡಿ ಸರ್ ಇಲ್ಲಿ ಸ್ವಚ್ಚವಾಗಿ ಹರಿಯುತ್ತಿರೋ ನದಿಯನ್ನ..ಇದು ’ಕುಮಾರಧಾರ’ ಅಂತ..ಈ ನದಿ ಹರಿದು ಬರೋದು ಅಮೂಲ್ಯ ಖನಿಜ ಸಂಪತ್ತು ಹಾಗೂ ಅತ್ಯಮೂಲ್ಯ ಆಯುರ್ವೇದ ಔಷಧೀಯ ಸಸ್ಯಗಳಿರುವ ಸುಂದರ ಅರಣ್ಯದಿಂದ..ನಿಮಗೆ ಗೊತ್ತಾ ಸಾರ್ ..ಈ ನದಿಯಲ್ಲಿ ಮಿಂದರೆ ಚರ್ಮರೋಗಗಳೂ ಕಮ್ಮಿಯಾಗುತ್ತೆ..ಇಲ್ಲಿ ವಿದ್ಯುತ್ ಯೋಜನೆಗೆ ನೀವು ಅಣೆಕಟ್ಟು ನಿರ್ಮಿಸಿದರೆ ಈ ನದಿ ಬತ್ತಿ ಹೋಗುತ್ತೆ ..ಮತ್ತೆ ಹಿನ್ನೀರು ಅರಣ್ಯದೊಳಗೆ ನುಗ್ಗಿದರೆ ಪ್ರಾಣಿ..ಪಕ್ಷಿಗಳು ಸತ್ತು ಹೋಗುತ್ವೆ..ನೂರಾರು ಹೆಕ್ಟೇರ್ ಕಾಡು ನಾಶ ಆಗುತ್ತೆ..ಅಪಾರ ಸಸ್ಯಸಂಪತ್ತೂ ಮುಳುಗಿಹೋಗುತ್ತೆ....ಬೇಕಾ ಸಾರ್ ಇದು ? "


"ಹಿನ್ನೀರು.. ಡಾಲರ್ಸ್ ಕಾಲೋನಿತನಕ ಏನು ಬರೋದಿಲ್ವಲ್ಲ...ಬಿಡಯ್ಯಾ ಮತ್ತೆ..!!"



" ಹೀಗೆ ಹೇಳ್ದ್ರೆ ಹೇಗೆ ಸರ್... ಈಗಾಗ್ಲೆ ಆಹಾರ ಸಿಗ್ದೆ ಆನೆಗಳೆಲ್ಲಾ ಊರೊಳಗೆ ನುಗ್ಗಿ ದಾಂಧಲೆ ಮಾಡ್ತಿವೆ. ನೂರಾರು ಜೀವಗಳೂ ಹೋಗಿವೆ. ಇನ್ನು ಕಾಡೂ ಕಮ್ಮಿಯಾದ್ರೆ ಹುಲಿ-ಚಿರತೆಗಳೂ ಊರಿಗೆ ಬರುತ್ವೆ ..ಬದ್ಕೊಧ್ಹೇಗೆ ಹೇಳಿ..ಅದೂ ಅಲ್ದೆ ಯೋಜನೆ ಹೆಸ್ರಲ್ಲಿ ಅಮೂಲ್ಯ ಮರಗಳ ಲೂಟಿಯೂ ನೆಡೆಯುತ್ತೆ..ಕಳ್ಳರಿಗೆ ದಾರಿ ಮಾಡಿಕೊಟ್ಟ ಹಾಗೆ ಇದು...ಯೋಜನೆ ಅನುಷ್ಟಾನಕ್ಕೂ ಕಾಡು ನಾಶವಾಗುತ್ತೆ ಯೋಜನೆಯ ನಂತರವೂ ನಾಶವಾಗುತ್ತೆ... ನೀವು ಯೋಜನೆ ಕೈ ಬಿಡದಿದ್ರೆ ನಾನು ಇಲ್ಲಿಯ M.L.A.  ಸಾಹೇಬ್ರ ಜೊತೆ ಧರಣಿ ಮಾಡ್ತಿನಿ.."


" ಮಾಡಯ್ಯ....ನನಗೂ ಸ್ವಲ್ಪ ಪ್ರಚಾರ ಸಿಗುತ್ತೆ.. ಇಷ್ಟಕ್ಕೂ ಆ M.L.A ನೂ ನಮ್ ಪಾರ್ಟೀನೇ ತಿಳ್ಕೊ..!!"


"ಆದ್ರೂ ಸರ್...ನೀವು ಯೋಚನೆ ಮಾಡ್ಬೇಕು..ಈಗಾಗ್ಲೆ ಜನರ ಪರವಾಗಿ  "ಜೈರಾಮ್ ರಮೇಶ್" "ಬಹುಗುಣ" " ಶ್ರೀ ವಿದ್ಯಾಪ್ರಸನ್ನ ತೀರ್ಥರು " ಮಲೆನಾಡು ಹೋರಾಟ ಸಮಿತಿಯವರು ಎಲ್ರೂ ವಿರೋಧ ಮಾಡ್ತಿದ್ದಾರೆ...ಮೇಧಾಪಾಟ್ಕರ್ ಕೂಡ ಬರೋರಿದ್ದಾರೆ... ಬೇರೇ ಎಲ್ಲಾದ್ರು ವಿದ್ಯುತ್ ಉತ್ಪಾದಿಸಿ...ಇಲ್ಲಿಯ ಪ್ರಕೃತಿ ಅತ್ಯಮೂಲ್ಯ ...ನಾವು-ನೀವು ಇದ್ನೆಲ್ಲಾ ಸೃಷ್ಟಿಸೋಕೆ ಆಗೋಲ್ಲ ಸರ್...  "


" ಸೃಷ್ಟಿ ಮಾಡೋದು ಬ್ರಹ್ಮ ಅಲ್ವೇನಯ್ಯಾ.....ಇನ್ನೊಂದ್ಸಲ ಎಲ್ಲಾ ಸೃಷ್ಟಿಸ್ತಾನೆ ಬಿಡು !! "


"ನಮ್ಮದು ಪ್ರಜಾಪ್ರಭುತ್ವ ಸಾರ್...ಅಲ್ಲಿನ ಸ್ಥಳೀಯರ ನಿರ್ಧಾರಕ್ಕೆ ಬೆಲೆ ಕೊಡ್ಬೇಕು ...ಅವರಿಗೇ ಬೇಡವಾದ್ದು ನಿಮಗ್ಯಾಕೆ ?  ಕುಕ್ಕೆ ಸುಬ್ರಹ್ಮಣ್ಯ, ಮಾರನಹಳ್ಳಿ, ಬಿಸಲೆ ಅರಣ್ಯದೊಳಗಿನ ಊರುಗಳು, ಇನ್ನೂ ಸಾಕಷ್ಟು ಪ್ರದೇಶಗಳು ಈ ಯೋಜನೆಯಿಂದ ಭಾದಿತವಾಗುತ್ತೆ ...ಇನ್ನಷ್ಟು ಪರಿಸರ ಮಾಲಿನ್ಯ ಉಂಟಾಗುತ್ತೆ...ತಾಪ ಇನ್ನಷ್ಟು ಹೆಚ್ಚಾಗುತ್ತೆ...ಚುನಾವಣೆ ಸಮಯದಲ್ಲಿ ಯಾರಿಂದಲೋ ದುಡ್ಡು ತಗೊಂಡು ಅವರ ಆಸೆ ಪೂರೈಸೋದಕ್ಕೆ ಪರಿಸರ ಬಲಿ ಕೊಡೋದು ನ್ಯಾಯಾನಾ ಸರ್ ? "


" ಚುನಾವಣೆ ಬಂದಾಗ ನೀನು ಬಾರಯ್ಯಾ....ನಿನಗೂ ಕೊಡ್ತೀನಿ...ಓಟು ಹಾಕೋದಷ್ಟೇ ನಿನ್ನ ಕೆಲಸ..ಉಳಿದದ್ದು ಸರ್ಕಾರದ ಕೆಲಸ...ಸುಮ್ನೇ ಹೋಗಯ್ಯಾ...!!"


ನನ್ನ ಕೊನೆ ಪ್ರಯತ್ನ ....


" ಸಾರ್ ಹೇಗೂ 2012 ಕ್ಕೆ ಜಗತ್ಪ್ರಳಯ ಆಗುತ್ತೆ...ನನಗೆ ಪಕ್ಕಾ ಮಾಹಿತಿ ಬಂದಿದೆ !  ಯಾರೂ ಇರೋಲ್ಲ ಅಂದಮೇಲೆ ಈ ಯೋಜನೆ ಯಾಕೆ ಸರ್....ನಿಮಗೆ ಬೇಕಾಗಿರೋದು ಈ ಯೋಜನೆಯಿಂದ ಬರೋ ಹಣ ತಾನೆ...ಒಂದು ಕೆಲಸ ಮಾಡಿ..ಈ ಯೋಜನೆಯ ಪೂರ್ತಿ ಹಣವನ್ನು ನೀವು ಮತ್ತೆ ನಿಮ್ಮ "ಕಡೆಯವರು" ಹಂಚಿಕೊಂಡುಬಿಡಿ...ನಾವೇನೂ ಕೇಳೋಕೆ ಬರೋದಿಲ್ಲ.. ಬೇಕಾದ್ರೆ ನೆರೆ ಪರಿಹಾರಕ್ಕೆ ದೇಣಿಗೆ ಎತ್ತಿ ಕೊಟ್ವಲ್ಲಾ..ಹಾಗೂ ಕೊಟ್ಟು ಬಿಡ್ತೀವಿ...ಆದ್ರೆ  ದಯವಿಟ್ಟು ಈ ಮೂಕ ಪ್ರಾಣಿಗಳನ್ನ, ಸ್ವಚ್ಚಂದವಾಗಿ ಹಾರಾಡ್ತಿರೋ ಹಕ್ಕಿಗಳನ್ನ, ಸದಾ ನಗುತ್ತಿರೋ ಸಸ್ಯಗಳನ್ನ, ಹಸಿರು ತುಂಬಿದಕಾಡನ್ನು. ಈ ನದಿ, ಬೆಟ್ಟ, ಈ ಸಮೃದ್ದ ಪರಿಸರವನ್ನ ಅವುಗಳಿಗೋಸ್ಕರ... ಬಿಟ್ಟುಬಿಡಿ ಸಾರ್...ಬೇಕಾದ್ರೆ ನನ್ನ ಬಲಿ ತಗೊಳ್ಳಿ ಸಾರ್ .."


          ನನ್ನ ಮಾತು ಅವರ ಕಿವಿಗೆ ಬೀಳಲೇ ಇಲ್ಲ....ತಮ್ಮ ಮೋಟಾರು ಹತ್ತಿ ಬುರ್ ಎಂದರು ....!!
....................................................................................................................................................................


ಖೊನೆ ಖಿಡಿ :


ಅಲ್ಲಿ ಬೀಜರಹಿತ ಹಣ್ಣುಗಳ ಸೇವನೆಯ ಪರಿಣಾಮಗಳ ಬಗ್ಗೆ ವಿಚಾರ ಸಂಕಿರಣ ನೆಡೆಯುತ್ತಿತ್ತು....ಅಲ್ಲಿ ಶಂಭುಲಿಂಗನೂ ಇದ್ದ !
ಅಲ್ಲೇ ಪ್ರದರ್ಶನಕ್ಕಿಟ್ಟಿದ್ದ ಹಲಸಿನ ಹಣ್ಣೊಂದನ್ನು ತೆಗೆದು ಸುಲಿದೇಬಿಟ್ಟ...ಅತ್ಯಾಶ್ಚರ್ಯದಿಂದ ಅಧಿಕಾರಿಯನ್ನು ಕೇಳಿದ...


ಶಂಭುಲಿಂಗ : ಇದೇನ್ ಬುದ್ದಿ...ಈ ಅಣ್ಣಾಗೇ ಬೀಜ್ವೇ ಇಲ್ಲಾ.... 
ಅಧಿಕಾರಿ :     ಅದು ಸೀಡ್ಲೆಸ್ ಹಣ್ಣು ಕಣಪ್ಪಾ...ಈವಾಗೆಲ್ಲಾ ಹೀಗೇ ಹಣ್ಣುಗಳು ಬರೋದು...
ಶಂಭುಲಿಂಗ : ಅಂಗಾದ್ರೆ... ಇನ್ಮುಂದೆ ಮನುಸ್ರು ಇಂಗೇ ಉಟ್ತಾರಾ ಬುದ್ದಿ ...!!!!!!??
                                            
                                      ಸಿವನೇ ಸಂಭುಲಿಂಗ  :)




ವಂದನೆಗಳೊಂದಿಗೆ ....................