Sep 7, 2011

ವಿವೇಕ ಚೂಡಾಮಣಿ - ಭಾಗ -೧೦

ತಿಮ್ಮಪ್ಪ ಕೈಕೊಟ್ಟ...




ಎತ್ತ ನೋಡಿದರೂ ಸಿರಿ ಸುಗ್ಗಿ,
ಮನೆಯಲ್ಲಿ ಬಾನಲ್ಲಿ ಭುವಿಯ ತಳಪಾಯದಲಿ
ಹಾಸಿಗೆಯ ಅಡಿಯಲ್ಲಿ ದಿಂಬುಗಳ ನಡುವಲ್ಲಿ;
ಕೆದಕಿದರು ಕೆದರಿದರು ಜನುಮ ಜಾಲಾಡಿದರು
ಕಂಡದ್ದು ಹೊನ್ನು ಕಾಣದ್ದು ದಿಗಂತ !
ಮನುಜನಾಸೆಗೆಲ್ಲಿಹುದು ಮಿತಿಯು ?
ಮಿತಿಮೀರಿ ಮತಿಮೀರಿ ಕಂಡಿದ್ದು ಮಾರಿ !
ತಿಮ್ಮಪ್ಪ ಕೈ ಕೊಟ್ಟ ಕರಿಯಪ್ಪ ಸೆರೆ ಕೊಟ್ಟ
ಒಪ್ಪೊತ್ತಿನೂಟ, ಸೊಳ್ಳೆ ಸಾಂಗತ್ಯದಲಿ ಬೇಟ !
ಬೇಕಿತ್ತೆ ಮನುಜ ? ಕಾಂಚಾಣದಾಸೆಯ ದೊಡ್ಡಾಟ
ತಂದಿಟ್ಟಿತೇ ಪ್ರಾಣಸಂಕಟ
ಇನ್ನೆಂದೂ ಬರನು ತಿರುವೆಂಕಟ.
ನೆಗೆದುಬಿದ್ದಿತೇ ನಿನ್ನೆಲ್ಲಾ ಮಾನ-ಧನ
ಯಾರು ಕಾಯ್ವರು ನಿನ್ನನಿನ್ನು ಹೇ - ಜನಾರ್ದನ !?