Dec 14, 2009

ರಾಜ್ಕೀಯದ್ ಮಾತು

ಸಿವನೇ ಸಂಬುಲಿಂಗ..........
ಇದೆಂಥಾ ಇಸ್ಯ ಬಿಡ್ಲಾ.....ಧಾರವಾಡ ದಿಂದ ಗೋವಾಕ್ಕೋದ್ರೆ ಏನ್ಲಾ ಬತ್ತದೆ ? ಗೋವಾದ್ಲೇನು ಇಲ್ಲಾ ಕಣಾಪ ಈಗ ...ಎಲ್ಲಾರ್ನು ಓಡಿಸ್ಬಿಟ್ಟವ್ರಂತೆ ಆಲ್ಲಿಂದಾ...ಆದ್ರೂ ನಮ್ ಮೆಂಬ್ರಿ ಗಳಿಗೂ ಯೇಗ ಬಂತು ಕಣಪಾ..ನೂರಿನ್ನೂರು ಕೆಬ್ರಿಕಾತ ಇದ್ದ ಐಕ್ಳು ಏಕ್ದ್ಂ ಸಾವಿರ , ಲಕ್ಸ ನೋಡಂಗಾದ್ರಲಾ...ಆದೇ ದೋಡ್ ಸಾದ್ನೆ ಬಿಡ್ಳಾ !! ಎಲ್ಲಾ ಲಕ್ಸಮಿ ಆಸೀರ್ವಾದ ಕನ್ಲೆ...ಬರೀ ಲಕ್ಸ್ಮಿ ಆಲಾ ಕನ್ಲಾ ..ವರಮಾಲಕ್ಸ್ಮಿ ಅಂತೆ !! ಪಾಪ ನಮ್ ಗೌಡ್ರು ಪನ್ಚೆ ಮ್ಯಾಗಿನ್ ಧೂಳ್ ಕೊಡ್ವಕಳದೇ ಆಯ್ತು....ಒಂದೀಸ್ಲಾದ್ರು ಇಂಗ್ ಮಜಾ ಮಾಡ್ಲಿಲ್ಲಾ ಕಣ್ಳಾ...!! ಆ ಐಕ್ಳಿಗಾದ್ರು ವಸಿ ಮರ್ವಾದಿ ಬ್ಯಾಡ್ವೆ ? ಓಟ್ಳಾಗೆ ಬರೀ ಚಡ್ಡೀಲೇ ಓತ್ಲಾ ವಡೀತಿದ್ರಂತೆ...ಆ ವಯ್ಯ ಅಮುಲ್ದಾರ್ರು ಓದೇಟ್ ಗೆ ಲುಂಗಿ ಸುತ್ಕ್ಂಡ್ವಂತೆ....ಏನ್ ಕಾಲ ಬಂತ್ಲಾ ದೇಸಕ್ಕೆ... ಒಂದ್ ಇಸ್ಯ ನಿಂತಾವ್ಲೆ ಇರ್ಲಿ....ಓಟ್ಳಾಗೆ ಮೂಗ್ ಬಟ್ಟಿಗೂ ಯವಸ್ತೆ ಆಗಿತ್ತಂತೆ...ಆಮುಲ್ದಾರ್ರು ಓಗಿ ಎಲ್ಲಾ ನೆಗೆದ್ ಬಿತ್ತಂತೆ ಕಣ್ಳಾ...(ಕಿಸ ಕಿಸ ನಗು !!) .....ಒತ್ತಾತು ನಡೀಲೇ....ಆಮ್ಯಾಕ್ ಸಿಗನಾ!!!

...........................................................

No comments: